Advertisement
ವೆದರ್ ಮಿರರ್

ವೆದರ್‌ ಮಿರರ್‌ | ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಸಮಸ್ಯೆ | ಏರುತ್ತಿರುವ ಉಷ್ಣತೆ | ಇಳಿಯುತ್ತಿರುವ ತೇವಾಂಶ |

Share

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಬಹಳವಾಗಿ ಕಾಡುತ್ತಿರುವ ವಿಷಯ. ಏಕೆ ಹೀಗೆ ಎಂದು ಅಧ್ಯಯನಗಳು ನಡೆದರೆ ಭೂಮಿಯ ಉಷ್ಣತೆಯಲ್ಲಿ  ಏರಿಕೆ ಮೊದಲಾಗಿ ಕಂಡುಬರುತ್ತಿದೆ. ಈಚೆಗೆ ನಡೆದ ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ದಿನಗಳಲ್ಲಿ  ಇಡೀ ಪ್ರಪಂಚದಲ್ಲಿ ಈಗಿನ ಉಷ್ಣತೆಗಿಂತ ಎರಡು ಡಿಗ್ರಿ ಕಡಿಮೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದಕ್ಕಾಗಿ ಅರಣ್ಯ ಸಂರಕ್ಷಣೆ, ವಾಯು ಮಾಲಿನ್ಯ ಕಡಿಮೆ ಮಾಡುವುದು  ಸೇರಿದಂತೆ ಸೋಲಾರ್‌ ಬಳಕೆಗೆ ಆದ್ಯತೆ ನೀಡಲೂ  ಶಿಫಾರಸು ಮಾಡಲಾಗಿತ್ತು.

ಈಗಾಗಲೇ ಭಾರತಕ್ಕೆ ಈ ವರ್ಷದ ಪ್ರಥಮ ವಾಯುಭಾರ ಕುಸಿತವು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆ ಇದೆ. ಈಗಿನ ಮುನ್ಸೂಚೆನೆಯಂತೆ ಮಾರ್ಚ್ 7 ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ತೇವಾಂಶ ಏರಿಕೆಯಾಗಿ ಮಾರ್ಚ್ 8 ರಿಂದ ಗುಡುಗು ಸಿಡಿಲು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮಾರ್ಚ್ 13 ರ ತನಕವೂ ಕರಾವಳಿ ಹಾಗೂ ಕೊಡಗಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಈ ನಡುವೆ ಶಿವರಾತ್ರಿ ಮುಗಿಯುತ್ತಿದ್ದಂತೆ ಸೆಖೆ ಆರಂಭವಾಗಬೇಕಿದ್ದ ಕಾಲದಲ್ಲಿ ಉಷ್ಣಾಂಶ ಮಾತ್ರ ಏರಿಕೆಯಾಗಿ ಶುಷ್ಕ ಹವೆ ಪ್ರಾರಂಭವಾಗಿರುವುದು ಮಳೆ ಬೀಳುವ ಸಾಧ್ಯತೆಯನ್ನು ದೂರ ಮಾಡಬಹುದೆ ? ಎಂಬ ಆತಂಕ ಮನೆಮಾಡಿದೆ. ಈ ವಾಯುಭಾರ ಕುಸಿತವು ಉತ್ತರ ಭಾರತದ ಕಡೆಯಿಂದ ಶುಷ್ಕ ಹವೆಯನ್ನು ಸೆಳೆಯುತ್ತಿದೆ. ಒಂದು ವಿಶ್ಲೇಷಣೆಯಂತೆ ವಾಯುಭಾರ ಕುಸಿತವು ತಮಿಳುನಾಡು ಪ್ರವೇಶಿಸಿದಂತೆ ವಾತಾವರಣದಲ್ಲಿ ತೇವಾಂಶ ಏರಿಕೆಯಾಗಬಹುದು.

ಕರಾವಳಿ ಭಾಗದಲ್ಲಿ ಈಗ ವಾತಾವರಣದ ಉಷ್ಣತೆ 38 ಡಿಗ್ರಿಯಿಂದ 41 ಡಿಗ್ರಿಯವರೆಗೂ ಏರಿಕೆಯಾಗುತ್ತದೆ, ಇಳಿಕೆಯಾಗುತ್ತದೆ. ಈ ನಡುವೆ ವಾತಾವರಣದ ತೇವಾಂಶವೂ ಕಡಿಮೆಯಾಗುತ್ತಿರುವುದು  ಗಮನಾರ್ಹ ಅಂಶವಾಗಿದೆ. ಕರಾವಳಿ ಪ್ರದೇಶದಲ್ಲೂ ಈಗ ಶೇಕಡಾ 12 – 15 ರಷ್ಟು ವಾತಾವರಣದ ತೇವಾಂಶ ಕಂಡುಬರುತ್ತಿದೆ. ಮಲೆನಾಡು ಪ್ರದೇಶದಲ್ಲೂ ತೇವಾಂಶ ಕುಸಿತವಾಗುವ ಕಾರಣದಿಂದ ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ,  ಹೀಗಾಗಿ ಈಚೆಗೆ ಕೆಲವು ವರ್ಷಗಳಿಂದ ಕೃಷಿಗೆ ವಿಪರೀತವಾದ ಬಿಸಿಲಿನ ಸಮಸ್ಯೆ ಕಾಡುತ್ತಿರುವುದು  ಕಂಡುಬರುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

4 hours ago

ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು

ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…

5 hours ago

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

10 hours ago

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

18 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 days ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

2 days ago