ಆಗ್ನೇಯ ಏಷ್ಯಾದಲ್ಲಿ ‘ಅಡಿಕೆ ಅಲರ್ಟ್‌’ | WHO ಹೊಸ “Strategic Framework”

February 7, 2026
3:13 PM

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನ ಕೊನೆಯಲ್ಲಿ ಮಾತನಾಡಿದ WHO ದ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞೆ ಹಾಗೂ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ  ಪ್ರಾದೇಶಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಲಿಕಾ ಗುಣವರ್ಧನ ಅವರು WHO ರೂಪಿಸಿರುವ ಅಡಿಕೆ ಬಳಕೆ ನಿಯಂತ್ರಣ Strategic Framework ಕುರಿತು ವಿವರಿಸುತ್ತಾ, ಈ ನಿಯಮವನ್ನು ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಪಡೆದು, ಕಳೆದ ವರ್ಷದಿಂದ ಜಾರಿಗೆ ಬಂದಿದೆ ಎಂದು ಹೇಳಿದರು.  ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆ, ಧೂಮರಹಿತ ತಂಬಾಕು ಹಾಗೂ ಹೊಸ ನಿಕೋಟಿನ್ ಉತ್ಪನ್ನಗಳಿಂದ ಉಂಟಾಗುತ್ತಿರುವ ಆರೋಗ್ಯ ಸಂಕಷ್ಟವನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ಚೌಕಟ್ಟು (Strategic Framework) ಬಿಡುಗಡೆ ಮಾಡಿದೆ ಎಂದರು.

ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಪಡೆದು ಕಳೆದ ವರ್ಷದಿಂದ ಜಾರಿಗೆ ಬಂದ ಈ ಚೌಕಟ್ಟು, ತಂಬಾಕು ನಿಯಂತ್ರಣಕ್ಕೆ ಇರುವ WHO–FCTC ಒಪ್ಪಂದ, Empower Package, NCD Best Buys ಹಾಗೂ Sustainable Development Goals (SDGs) ಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಈ ಚೌಕಟ್ಟಿನ ದೃಷ್ಟಿಯು WHO ಆಗ್ನೇಯ ಏಷ್ಯಾ ಪ್ರದೇಶವನ್ನು ತಂಬಾಕು, ನಿಕೋಟಿನ್, ಅಡಿಕೆ ಬಳಕೆ ಮುಕ್ತ ಪ್ರದೇಶವನ್ನಾಗಿಸುವುದು. ವಿಶೇಷವಾಗಿ ಯುವಜನತೆ, ಮಹಿಳೆಯರು ಹಾಗೂ ಹಿಂದುಳಿದ ಸಮುದಾಯಗಳನ್ನು ಈ ಉತ್ಪನ್ನಗಳ ಹಾನಿಯಿಂದ ರಕ್ಷಿಸಲು ಸಾಕ್ಷ್ಯಾಧಾರಿತ ನೀತಿಗಳು ಅಗತ್ಯವೆಂದು WHO ಸ್ಪಷ್ಟಪಡಿಸಿದೆ.

ಅಡಿಕೆ ಮತ್ತು ಧೂಮರಹಿತ ತಂಬಾಕು ಬಳಕೆಯಿಂದಾಗುವ ಆರೋಗ್ಯ, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಹಾನಿಯನ್ನು ಕಡಿಮೆ ಮಾಡಲು ದೇಶಗಳಿಗೆ ಮಾರ್ಗದರ್ಶನ ನೀಡುವುದು ಈ ಚೌಕಟ್ಟಿನ ಮುಖ್ಯ ಉದ್ದೇಶ ಆಗಿದೆ. ಇದಕ್ಕಾಗಿ 7 ಮಾರ್ಗದರ್ಶಕ  ಸೂತ್ರಗಳನ್ನು ನಿರ್ಮಿಸಲಾಗಿದೆ. ಈ ಚೌಕಟ್ಟು 7 ತತ್ವಗಳ ಮೇಲೆ ನಿರ್ಮಿತವಾಗಿದೆ. ರಾಷ್ಟ್ರೀಯ ಆದ್ಯತೆ ಮತ್ತು ಕಾನೂನುಗಳು, ಸರ್ಕಾರ–ಸಮಾಜ ಸಹಭಾಗಿತ್ವ, ಸಾಕ್ಷ್ಯಾಧಾರಿತ ಕ್ರಮ, ಪರಿಸರ ಮತ್ತು ಆರ್ಥಿಕ ಹೊಣೆಗಾರಿಕೆ ಸೇರಿದಂತೆ ಇತರ ಭಾಗ. ಇದೇ ವೇಳೆ ಈ ಸಮಸ್ಯೆ ಎದುರಿಸಲು 7 ಪ್ರಮುಖ ಗುರಿಗಳನ್ನು ಕೂಡಾ ಘೋಷಿಸಿದೆ. ನಾಯಕತ್ವ ಮತ್ತು ಆಡಳಿತ,  ನೀತಿ ಮತ್ತು ನಿಯಮಾವಳಿ ಸುಧಾರಣೆ, ಅನುಷ್ಠಾನ ಮತ್ತು ನಿಯಮ ಪಾಲನೆ , ಜಾಗೃತಿ ಮತ್ತು ಶಿಕ್ಷಣ, ಸಂಶೋಧನೆ ಮತ್ತು ಮೇಲ್ವಿಚಾರಣೆ.

 ಅಡಿಕೆ ನಿಯಂತ್ರಣಕ್ಕೆ ರಾಷ್ಟ್ರೀಯ ಚೌಕಟ್ಟು ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಡಾ.ನಲಿಕಾ ಹೇಳಿದರು. ಅಡಿಕೆ ಬಳಕೆಯನ್ನು ಕಡಿಮೆ ಮಾಡಲು ದೇಶಗಳು ತಮ್ಮದೇ ರಾಷ್ಟ್ರೀಯ ನಿಯಂತ್ರಣ ಚೌಕಟ್ಟು ರೂಪಿಸಬೇಕು. ಇದರಲ್ಲಿ ಜಾಗೃತಿ ಅಭಿಯಾನ, ಸಂಶೋಧನೆ, ರಕ್ಷಣಾ ವ್ಯವಸ್ಥೆಗಳು ಸೇರಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಡಿಕೆ ಸಮಸ್ಯೆ ಕುರಿತು ರಾಷ್ಟ್ರೀಯ ಮಟ್ಟದ ಪಾಲುದಾರರ ಸಂವಾದ ಆರಂಭವಾಗಬೇಕು,  ಸ್ಥಳೀಯ ಪರಿಸ್ಥಿತಿಗೆ ಹೊಂದುವ ನೀತಿ ರೂಪಿಸುವುದು, ಯುವಜನ, ಮಹಿಳೆಯರು, ಗ್ರಾಮೀಣ ಸಮುದಾಯಗಳಿಗೆ ವಿಶೇಷ ಜಾಗೃತಿ ಅಭಿಯಾನ, ತಂಬಾಕು ಸೇವೆಗಳಲ್ಲಿ ಅಡಿಕೆ ನಿಯಂತ್ರಣ ಸೇರಿಸುವುದು, ಆರೋಗ್ಯ ಪರಿಣಾಮ ಮತ್ತು ಮಾರುಕಟ್ಟೆ ಕುರಿತು ಸಂಶೋಧನೆ ಬೆಂಬಲ, ರಾಷ್ಟ್ರೀಯ ಸಮೀಕ್ಷೆಗಳಲ್ಲಿ ಅಡಿಕೆಯನ್ನು ಸೇರಿಸುವ ಮೇಲ್ವಿಚಾರಣಾ ವ್ಯವಸ್ಥೆ ಇರಬೇಕು. 2027 ಮತ್ತು 2030 ರಲ್ಲಿ ಪ್ರಗತಿ ವರದಿ ಪ್ರಾದೇಶಿಕ ಸಮಿತಿಗೆ ಸಲ್ಲಿಸುವುದಾಗಿ WHO ತಿಳಿಸಿದೆ.

ಒಟ್ಟಾರೆ, ಅಡಿಕೆ ಹಾಗೂ ಧೂಮರಹಿತ ತಂಬಾಕು ಬಳಕೆ ಆಗ್ನೇಯ ಏಷ್ಯಾದಲ್ಲಿ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವುದರಿಂದ, ನೀತಿ ಸುಧಾರಣೆ, ಜಾಗೃತಿ, ಮೇಲ್ವಿಚಾರಣೆ ಮತ್ತು ಸಂಶೋಧನೆ ಮೂಲಕ ಸಮಗ್ರ ನಿಯಂತ್ರಣ ಅಗತ್ಯವೆಂದು WHO ಸ್ಪಷ್ಟಪಡಿಸಿದೆ.

ಇದನ್ನೂ ಓದಿ….

ಗ್ರಾಮೀಣ ಹಲಸಿಗೆ ಗ್ಲಾಮರ್‌ ಸ್ಪರ್ಶ | ಕೇರಳದಲ್ಲಿ ಬಾಟಲಿಯೊಳಗೆ ಬಂದ ಜಾಕ್‌ಫ್ರೂಟ್ ವೈನ್

ನಿಮ್ಮ ಪ್ರತಿಕ್ರಿಯೆಗಳಿಗೆ….

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ
July 27, 2026
11:36 AM
by: ದ ರೂರಲ್ ಮಿರರ್.ಕಾಂ
200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ
July 27, 2026
11:27 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ
ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ
July 27, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror