ಸಂಬಂಧ

September 2, 2019
1:00 PM
ಒಣಗಿ ಹೋದ ಮರದ ಮೇಲೆ
ಕುಳಿತ ಪಕ್ಷಿಗೆ ಕಾಡುತ್ತಿದೆ ಚಿಂತೆ
ವಸಂತ ಮಾಸದಲ್ಲೂ ಮರದಲ್ಲಿ
ಚಿಗುರಿಲ್ಲವೆಂದು…
ಅದು ಬಯಸುತ್ತಿದೆ
ಹೂವಿನ ಘಮ,ಹಣ್ಣಿನ ಸ್ವಾದ
ಮತ್ತೆ ಬೇಕೆಂದು
ಅತ್ತು ಕರೆಯುತ್ತಿದೆ ಮಳೆರಾಯನ
ಬಂದು ಚಿಗುರಿಸಬಾರದೇ ಮರವನ್ನ?
ಆದರೆ ಪಕ್ಷಿಗೇನು ಗೊತ್ತು?
ಮರ ಸಾಯಲೆಂದು
ಬೇರಿಗೆ ವಿಷವುಣಿಸಿದ ಮನುಜನ ಮರ್ಮ!
ನೆರಳನುಣಿಸಿದ ಮರಕ್ಕೂ
ಗೊತ್ತಿಲ್ಲ ತಾನುಂಡಿದ್ದು ವಿಷವೆಂದು
ಸತ್ತ ಮರವೂ ಕಣ್ಣೀರಿಡುತ್ತಿದೆ
ಬಾರದ ಮಳೆಯ ಶಪಿಸುತ್ತಿದೆ
ಮರದ ಆಶ್ರಯ ಮರೆಯದ
ಪಕ್ಷಿ ಮತ್ತೆ ಹಾಡಲಾರಂಭಿಸಿದೆ
ಮರದ ನೋವ ಮರೆಸಲೆಂದು
ಎಂದೆಂದೂ ಜೊತೆ ನಾನಿರುವೆನೆಂದು…!
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ
‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?
September 1, 2026
7:02 AM
by: ದ ರೂರಲ್ ಮಿರರ್.ಕಾಂ
ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..
August 21, 2026
6:28 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror