Advertisement
Exclusive - Mirror Hunt

ಅಡಿಕೆ ಬೆಳೆ ವಿಸ್ತರಣೆಯ ಆತಂಕದ ಬದಲು ಮುಂಜಾಗ್ರತೆ ವಹಿಸಬೇಕು | ಕ್ಯಾಂಪ್ಕೋ ಮಾಜಿ ಆಡಳಿತ ನಿರ್ದೇಶಕರ ಸಲಹೆ ಏನು ?

Share
ಅಡಿಕೆ ಬೆಳೆ ವಿಸ್ತರಣೆ ಹಾಗೂ ಅಡಿಕೆ ಮಾರುಕಟ್ಟೆಯ ಬಗ್ಗೆ  ಅಡಿಕೆ ಬೆಳೆಯುವ ಪ್ರದೇಶದ ಕೃಷಿಕರಲ್ಲಿ ಆತಂಕ ಇದೆ. ಈ ನಡುವೆಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ವಾಸ್ತವದಲ್ಲಿ ಅಡಿಕೆ ಮಾರುಕಟ್ಟೆ ಹೇಗಿದೆ ? ಮುಂದೆ ಏನಾಗಬಹುದು ? ಈ ಬಗ್ಗೆ ಕ್ಯಾಂಪ್ಕೋ ಆರಂಭ ಕಾಲದಿಂದಲೂ ಕೆಲಸ ಮಾಡುತ್ತಿದ್ದು,ಅಡಿಕೆ ಬೆಳೆಯುವ ಪ್ರದೇಶ ಹಾಗೂ ಅಡಿಕೆ ಬಳಕೆಯ ಪ್ರದೇಶ, ಬೇಡಿಕೆಯ ಪ್ರದೇಶಗಳಿಗೆ ಭೇಟಿ ನೀಡಿ ಅನುಭವ ಹೊಂದಿರುವ ಕ್ಯಾಂಪ್ಕೋ ಆಡಳಿತ ನಿರ್ದೇಶಕರಾಗಿ ನಿವೃತ್ತರಾಗಿರುವ  ಎ ಎಸ್‌ ಭಟ್‌ ಅವರ ಜೊತೆ ಬೆಳೆಗಾರರ ಹಿತದೃಷ್ಟಿಯಿಂದ ನಡೆಸಿದ ಮಾತುಕತೆ ಇಲ್ಲಿದೆ.

ಅಡಿಕೆ ಮಾರುಕಟ್ಟೆ ಸ್ಥಿರೀಕರಣ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಸ್ಥಾಪನೆಯಾಗುವ ಸಂದರ್ಭ ಮಾಡಿದ ಸರ್ವೆ ಪ್ರಕಾರ 1.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 1.5 ಲಕ್ಷ ಟನ್‌ ಅಡಿಕೆ 1972 ರಲ್ಲಿ ಉತ್ಪಾದನೆಯಾಗುತ್ತಿತ್ತು. ಆ ಕಾಲದಲ್ಲಿ ಅಡಿಕೆ ಧಾರಣೆಯು 1974 ರಲ್ಲಿ ಬಿಳಿ ಅಡಿಕೆಗೆ 3-‌4 ರೂಪಾಯಿ, ಕೆಂಪಡಿಕೆಗೆ  3 -4 ರೂಪಾಯಿ ಹಾಗೂ ಶಿವಮೊಗ್ಗದ ಹಸಕ್ಕೆ ಮಾತ್ರಾ 5-6  ರೂಪಾಯಿ ಇತ್ತು. 1964 ರಿಂದ ಅಡಿಕೆ ಆಮದು ಕೂಡಾ ಇರಲಿಲ್ಲ. 

ಎ ಎಸ್‌ ಭಟ್

ಕ್ಯಾಂಪ್ಕೋ ಸ್ಥಾಪನೆ ಬಳಿಕ ಧಾರಣೆ ಏರಿಕೆಯಾಯಿತು, ಬಳಿಕ ಅಡಿಕೆ ಬೆಳೆ ವಿಸ್ತರಣೆಯೂ ಆಯಿತು. 1990 ರಲ್ಲಿ ಹೊತ್ತಿಗೆ ಅಡಿಕೆ ಧಾರಣೆ 45 ರೂಪಾಯಿ ಆಸುಪಾಸಿಗೆ ಬಂದಿತು. ಆ ಬಳಿಕವೂ ಅಡಿಕೆ ವಿಸ್ತರಣೆ ಮುಂದುವರಿಯಿತು. ಇದೇ ವೇಳೆ ಅಡಿಕೆ ಬಳಕೆಯೂ ದೇಶದಲ್ಲಿ ಹೆಚ್ಚಾಯಿತು. ಇಲ್ಲಿಯ ಉತ್ಪಾದನೆ ಸಾಕಾಗದೆ ಆಮದು ಕೂಡಾ ನಡೆಯುತ್ತಿತ್ತು. ಈಚೆಗೂ ಅಡಿಕೆ ಆಮದು ನಡೆಯುತ್ತಿತ್ತು. ಅಂದರೆ ಅಡಿಕೆ ಮಾರುಕಟ್ಟೆ ಇದೆ, ಬೇಡಿಕೆಯೂ ಇದೆ. ಅಂದರೆ  ಕಳೆದ ಎರಡು ವರ್ಷದವರೆಗೆ ಇಲ್ಲಿನ ಅಡಿಕೆಯ ಉತ್ಪಾದನೆ ಬಳಕೆ ಆಗುತ್ತಿದೆ. ಆದರೆ ಈಗ ಅಡಿಕೆ ಧಾರಣೆ ವಿಪರೀತ ಏರಿಕೆಯ ಬಳಿಕ ಆತಂಕ ಇದೆ. ಈ ಎಲ್ಲಾ ಬೇಡಿಕೆ ಪೂರೈಕೆಯಾದರೆ ಏನು ಎಂಬ ಚಿಂತನೆ ನಡೆಸಬೇಕಿದೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಯಲ್ಲಿ ಎಚ್ಚರಿಕೆ ಇರಲೇಬೇಕು. ಈ ಬಗ್ಗೆ  ಬೆಳೆಗಾರರಿಗೆ ಜಾಗೃತೆ ಬೇಕು, ಬೆಳೆಗಾರನೇ ಈ ಬಗ್ಗೆ ಯೋಚಿಸಬೇಕು. ಯಾವತ್ತೂ ಬೆಳೆ ವಿಸ್ತರಣೆ, ಬೆಳೆ ಬೆಳೆದರೆ ಸಾಲದು ಮಾರುಕಟ್ಟೆಯನ್ನೂ ಗಮನಿಸಬೇಕು. ಬೇಕಾಬಿಟ್ಟಿಯಾಗಿ ಈ ಧಾರಣೆ ಇದೆ ಎಂದು ಬೆಳೆದರೆ ಸಂಕಷ್ಟ ನಿಶ್ಚಿತವೇ ಆಗಿದೆ. ಇದಕ್ಕಾಗಿ ಅಡಿಕೆ ಬೆಳೆಯ ಸರ್ವೆ ಹಾಗೂ ಬಳಕೆಯ ಬಗ್ಗೆ ಸರ್ವೆ ಆಗಬೇಕು. ಈ ಮೂಲಕ ಬೆಳೆಯ ಬಗ್ಗೆ ನಿಯಂತ್ರಣವೂ ಇರಬೇಕು.

ಅಡಿಕೆ ಸದ್ಯ ಬ್ಯಾನ್‌ ಆಗಲು ಸಾಧ್ಯವಿಲ್ಲ. ಈ ಆತಂಕ ಇರಬೇಕಾಗಿಲ್ಲ. ಹೀಗಾಗಿ ಅಡಿಕೆ ಭವಿಷ್ಯವೇ ಇಲ್ಲ ಎಂದು ಯಾವ ಬೆಳೆಗಾರರೂ ಚಿಂತಿಸಬೇಕಿಲ್ಲ. ಅಡಿಕೆ ಬ್ಯಾನ್‌ ಆಗದೇ ಇರಲು ಹಲವು ಕಾರಣಗಳು ಇವೆ. ದೇಶಗಳ ನಡುವೆ ಒಪ್ಪಂದ ಸೇರಿದಂತೆ ವಿವಿಧ ಕಾರಣಗಳು ಇರುತ್ತವೆ. ಹೀಗಾಗಿ ಏಕಾಏಕಿ ನಿಷೇಧ ಸಾಧ್ಯವಿಲ್ಲ. ಆದರೆ ಬೆಳೆ ವಿಸ್ತರಣೆ, ಧಾರಣೆ ಸ್ಥಿರತೆ, ಭವಿಷ್ಯದ ಕೃಷಿ ಇತ್ಯಾದಿಗಳ ಬಗ್ಗೆ ಬೆಳೆಗಾರ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಈ ನಡುವೆಯೇ ಪರ್ಯಾಯ ಬೆಳೆ, ಮಿಶ್ರ ಬೆಳೆಗಳ ಕಡೆಗೂ ಕೃಷಿಕ ಯೋಚಿಸಬೇಕು. ಸರ್ಕಾರ ಪರ್ಯಾಯ ಬೆಳೆಯ ಬಗ್ಗೆ ಸರಿಯಾದ ಮಾಹಿತಿಯನ್ನೂ ನೀಡಬೇಕು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

9 hours ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

1 day ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

1 day ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

3 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago