Advertisement
ಅನುಕ್ರಮ

#ನಾನುಕೃಷಿಕ | ನೀವು ಕೃಷಿಗೆ ಇಳಿಯುವ ಪ್ಲಾನ್‌ ಇದ್ದರೆ ಬೇಗನೆ ಇಳಿದು ಬಿಡಿ | ಕೃಷಿಗೆ ಇಳಿದ ಯುವಕ ಶ್ರೀನಂದನ ಮಾತು |

Share
ಯುವ ಕೃಷಿಕರನ್ನು ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ದಿ ರೂರಲ್‌ ಮಿರರ್ ಆರಂಭಿಸಿದೆ. ಕೃಷಿ ಕೂಡಾ ಒಂದು ಹೆಮ್ಮೆಯ ಉದ್ಯೋಗ. ನೆಮ್ಮದಿ ಕೊಡುವ ಈ ಉದ್ಯೋಗ ಮಾಡುವ ಯುವ ಕೃಷಿಕರು ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು. ಯುವಕೃಷಿಕರು ನಿಮ್ಮ ಆಸುಪಾಸಿನಲ್ಲಿದ್ದರೆ ನಮಗೆ ಮಾಹಿತಿ ನೀಡಿ, ನಾನುಕೃಷಿಕ ಎಂದು ಹೆಮ್ಮೆಯಿಂದ ಹೇಳುವ ಅಭಿಯಾನ ಆರಂಭಿಸೋಣ

“ನೀವು ಕೃಷಿಗೆ ಇಳಿಯುವ ಪ್ಲಾನ್‌ ಇದ್ದರೆ ಬೇಗನೆ ಇಳಿದು ಬಿಡಿ. ಹಿರಿಯರು ಮನೆಯಲ್ಲಿ ಮಾರ್ಗದರ್ಶನ ಮಾಡುವಾಗಲೇ ಕೃಷಿಯಲ್ಲಿ ಇದ್ದು ಬಿಡಿ…” ಹೀಗೆಂದು ಸಲಹೆ ನೀಡುವವರು ಯುವ ಕೃಷಿಕ ಶ್ರೀನಂದನ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಣ್ಮೂರಿನ ಶ್ರೀನಂದನ ಅವರು ಈಗ ಯುವ ಕೃಷಿಕ. ಎಣ್ಮೂರಿನ ಪ್ರಸನ್ನ ಕುಂಞಹಿತ್ಲುಹಾಗೂ ಭಾಗ್ಯ  ಅವರ ಪುತ್ರನಾಗಿರುವ ಶ್ರೀನಂದನ ಅವರು ಪದವಿಯ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು ಬಸ್ಸು ಹತ್ತಿದವರು. ಕೃಷಿಯಲ್ಲಿಯೇ ನೆಲೆಯೂರುವ ಉದ್ದೇಶ ಹೊಂದಿದ್ದ ಅವರು ಬೆಂಗಳೂರಿನ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ಕೆಲಸಕ್ಕೆ ಇಳಿದರು.

ತಂದೆ ಮಾಡಿರುವ ಕೃಷಿ ಕಾಯಕವನ್ನು ಮುಂದುವರಿಸುತ್ತಾ ಅಭಿವೃದ್ಧಿ ಪಡಿಸಿದ ಶ್ರೀನಂದನ್‌ ಅವರು ಕೃಷಿಗೆ ಬಂದ ವರ್ಷ ಕೊಳೆರೋಗದಿಂದ ಅಡಿಕೆ ವ್ಯಾಪಕವಾಗಿ ನಷ್ಟವಾಗಿತ್ತು. ಈ ಸಂದರ್ಭ ತಂದೆಯ ಬೆಂಬಲದ ಮಾತುಗಳಿಂದ ಧೈರ್ಯ ಬಂದಿತ್ತು ಎನ್ನುವ ಶ್ರೀನಂದನ, ಕೃಷಿಯಲ್ಲಿಎಳೆಯ ಪ್ರಾಯದಲ್ಲಿ ಅಂದರೆ ಬಹುಬೇಗನೆ ತೊಡಗಿಸಿಕೊಂಡಾಗ ಕೃಷಿ ಸವಾಲುಗಳು ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಒಂದು ಸಮಯದಲ್ಲಿ ತೋಟದ ಕಾಳುಮೆಣಸು ಕೊಯ್ಯಲು ಜನ ಸಿಗದೇ ಇದ್ದಾಗ ನಾನೇ ಸ್ವತ: ಆರಂಭಿಸಿದೆ, ಈಗ ಅಭ್ಯಾಸವಾಗಿದೆ ಎನ್ನುತ್ತಾರೆ ಶ್ರೀನಂದನ.

ಮನೆಯಲ್ಲೂ ಮನೆಯಾಕೆಗೂ ಕೃಷಿ, ಹಳ್ಳಿ ಪ್ರದೇಶ ಇಷ್ಟವಾದ ಕಾರಣ ಕೃಷಿ ಬದುಕು ಸಂತೃಪ್ತವಾಗಿದೆ, ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳುತ್ತಾರೆ.

ನಿಮ್ಮ ಆಸುಪಾಸಿನ ಯುವಕೃಷಿಕರ ಬಗ್ಗೆ ನಮಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿ. ವಾಟ್ಸಪ್‌ ಸಂಖ್ಯೆ 9449125447
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

4 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

10 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

19 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

1 day ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago